Meenakshi Ninna Kanna Mele

ಚಿತ್ರ: ರಣಧೀರ
ಸಾಹಿತ್ಯ, ಸಂಗೀತ: ಹಂಸಲೇಖ
ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ

ಮೀನಾಕ್ಷಿ ನಿನ್ನ ಕಣ್ಣ ಮೇಲೆ ಮುರಳಿಗೇಕೊ ಕಣ್ಣು
ಕಾಮಾಕ್ಷಿ ನಿನ್ನ ಕೆನ್ನಗಳಿದು ಮಧುರವಾದ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ನಿನ್ನ ಪಾದ ಗೆಜ್ಜೆ ನಾದ ನಡೆವ ಭಂಗಿಗೆ
ಬಿಗಿದ ನಡುವ ತುಂಬಿದೆದೆಯ ಮೈ ಮೆರವಣಿಗೆ
ಗೋಕುಲದ ವೀದಿಗಳಿಗೆ ಸೂರ್ಯೋದಯವೇ
ನೀ ನಡೆದು ಬೀಗುತಿರಲು ಹೃದಯೋದಯವೇ
ನಳಿನಾಕ್ಷಿ ನಿನ್ನ ನಡುವ ಮೇಲೆ
ಈ ಮುರಾರಿ ಕಣ್ಣು
ಜಲಜಾಕ್ಷಿ ನೀನು ಗಿಣಿಯು ಕಂಡ
ಮಾಗಿ ತೂಗೊ ಹಣ್ಣು
ಕೇಳೆ ಸಖಿ ಮಕರಂದನ ರಾಯಭಾರ
ನೀನವನಿಗೆ ಹೆಣ್ಣು ಅವನಿನ್ನು ಬಿಡನಿನ್ನು

ದ್ವಾರಕಾಪುರದಲಿ ಅಸುರ ಸೈನ್ಯ ಧಾಳಿಗೆ
ಅವಿತು ಕುಳಿತ ಗೋಪಿ ಕುಲದ ಪ್ರಾಣ ರಕ್ಷೆಗೆ
ಶ್ರೀ ಕೃಷ್ಣನು ವೀರನಾಗಿ ಧಾವಿಸಿ ಬರಲು
ರಾಧೆ, ನೀ ಕರಪಿಡಿದು ಕರೆದೊಯ್ಯೆನಲು
ಕಮಲಾಕ್ಷಿ ನಿನ್ನ ಪ್ರಾಣದೊಡವೆ
ಮೇಲೆ ಅವನ ಕಣ್ಣು
ವಿಮಲಾಕ್ಷಿ ನೀನು ಶೇಷಶಯನ
ಕದ್ದು ಒಯ್ವ ಹಣ್ಣು



Credits
Writer(s): Hamsalekha
Lyrics powered by www.musixmatch.com

Link